ಆಂಡಾಳ್ (ಗೋದಾ ದೇವಿ )

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ತಿರುನಕ್ಷತ್ರ : ತಿರುವಾಡಿಪ್ಪೂರಂ

ಅವತಾರ ಸ್ಥಳ : ಶ್ರೀವಿಲ್ಲಿಪುತ್ತೂರ್

ಆಚಾರ್ಯರು : ಪೆರಿಯಾಳ್ವಾರ್

ಕೃತಿಗಳು : ತಿರುಪ್ಪಾವೈ, ನಾಚ್ಚಿಯಾರ್ ತಿರುಮೊೞಿ 

ತಿರುಪ್ಪಾವೈ ೬೦೦೦ ಪಡಿ ವ್ಯಾಖ್ಯಾನದಲ್ಲಿ ಪೆರಿಯಾವಾಚ್ಚಾನ್ ಪಿಳ್ಳೈ ಮೊದಲಿಗೆ ಎಲ್ಲಾ ಆಳ್ವಾರುಗಳಿಗಿಂತಲೂ ಗೋದೆಗಿರುವ ವೈಶಿಷ್ಟ್ಯವನ್ನು ಎತ್ತಿ ತೋರಿದ್ದಾರೆ. ಅವರು ಜೀವಾತ್ಮಾಗಳಲ್ಲಿರುವ ವಿವಿಧ ಸ್ತರಗಳನ್ನು ತೋರಿ, ಅವರುಗಳ ನಡುವೆ ಇರುವ ವ್ಯತ್ಯಾಸಗಳನ್ನೂ ಅದ್ಭುತವಾಗಿ ತೋರಿದ್ದಾರೆ.ಸಂಸಾರಿಗಳಿಗೂ (ದೇಹಾತ್ಮಾಭಿಮಾನಿಗಳು) ಮತ್ತು ಆತ್ಮ ಸ್ವರೂಪವನ್ನರಿತ ಋಷಿಗಳಿಗೂ ನಡುವಿನ ಭೇದವು ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವ ಭೇದದಂತೆ.

ಅಂತಹ ಋಷಿಗಳಿಗೂ (ಸ್ವಪ್ರಯತ್ನದಿಂದ ಜ್ಞಾನವನ್ನು ಸಂಪಾದಿಸಿದವರು, ಮತ್ತು ತಮ್ಮ ಕರ್ಮಾನುಸಾರ ಕೆಲವೊಮ್ಮೆ ಅಧಃಪತನಕ್ಕೆ ಆಸ್ಪದವಿರುವವರು) ಮತ್ತು ಆಳ್ವಾರುಗಳಿಗೂ (ಭಗವಂತನ ಕೃಪೆಯಿಂದ ಅನುಗ್ರಹಿಸಲ್ಪಟ್ಟ ಜ್ಞಾನವನ್ನು ಹೊಂದಿದವರು, ಮತ್ತು ಅದೇ ಕಾರಣದಿಂದಾಗಿ ಪರಿಶುದ್ಧರಾಗಿರುವವರು) ನಡುವಿನ ವ್ಯತ್ಯಾಸವು ಅದೇ ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವಷ್ಟು.ಇತರ ಆಳ್ವಾರುಗಳಿಗೂ (ಒಮ್ಮೆ ಸ್ವಾನುಭವದಲ್ಲಿ ಮುಳುಗಿ, ಮಗದೊಮ್ಮೆ ಮಂಗಳಾಶಾಸನಪರರಾಗುವವರು) ಮತ್ತು ಪೆರಿಯಾಳ್ವಾರ್‌ರಿಗೂ (ಸದಾ ಮಂಗಳಾಶಾಸನಪರರಾದವರು) ನಡುವೆ ಅದೇ ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವ ವ್ಯತ್ಯಾಸ.ಹಾಗೆಯೇ ಪೆರಿಯಾಳ್ವಾರ್ ಮತ್ತು ಅಂಡಾಳ್ ನಡುವಿನ  ವ್ಯತ್ಯಾಸವೂ ಚಿಕ್ಕ ಕಲ್ಲಿಗೆ ಮತ್ತು ದೊಡ್ಡ ಪರ್ವತಕ್ಕೆ ಇರುವ ಅಂತರವನ್ನು ಹೋಲುತ್ತದೆ. ಅದಕ್ಕೆ ಕಾರಣಗಳೇನೆಂದರೆ :

  • ಎಲ್ಲಾ ಆಳ್ವಾರುಗಳೂ ಮೊದಲು ಶ್ರೀಮನ್ನಾರಾಯಣನಿಂದ ಅನುಗ್ರಹಿಸಲ್ಪಟ್ಟು ನಂತರದಲ್ಲಿ ಸಂಸಾರಿಗಳನ್ನು ಎಚ್ಚರಿಸಿದರು (ಭಗವಂತನ ಬಗೆಗೆ ಜ್ಞಾನವನ್ನು ನೀಡಿದರು). ಆದರೆ ಅಂಡಾಳ್ ಸಾಕ್ಷಾತ್ ಭೂಮಿ ದೇವಿಯ ಅವತಾರವಾಗಿದ್ದು ತಾನೇ ಭಗವಂತನನ್ನು ಎಚ್ಚರಗೊಳಿಸಿ ಎಲ್ಲರನ್ನು ರಕ್ಷಿಸುವ ಜವಾಬ್ದಾರಿಯನ್ನು ಜ್ಞಾಪಿಸಿದಳು. ನಂಪಿಳ್ಳೈ ತಮ್ಮ ತಿರುವಿರುತ್ತಮ್ ಮತ್ತು ತಿರುವಯ್ಮೊೞಿ ವ್ಯಾಖ್ಯಾನಗಳಲ್ಲಿ ತೋರಿಸಿರುವಂತೆ ಆಳ್ವಾರುಗಳೆಲ್ಲರೂ ಮೊದಲು ಸಂಸಾರಿಗಳಾಗಿದ್ದು ನಂತರದಲ್ಲಿ ಭಗವಂತನಿಂದ ಅನುಗ್ರಹ ಹೊಂದಿದವರು. ಆದರೆ ಆಂಡಾಳ್ ಸಾಕ್ಷಾತ್ ಭೂಮಿದೇವಿಯ ಅವತಾರ. ಅವಳು ನಿತ್ಯಸೂರಿಯೇ ಆಗಿದ್ದು ವಿಶೇಷವಾಗಿ ಭಗವಂತನ ದಿವ್ಯ ಮಹಿಷಿಯರಲ್ಲಿ ಒಬ್ಬಳು. ಪೆರಿಯಾವಾಚ್ಚಾನ್ ಪಿಳ್ಳೈಯೂ ನಂಪಿಳ್ಳೈ ವ್ಯಾಖ್ಯಾನವನ್ನು ಅನುಸರಿಸಿ ಅದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವುದು ವಿಶೇಷ.
  • ಗೋದೆಯು ಸ್ವತಃ ಸ್ತ್ರೀಯಾಗಿದ್ದು ಆಕೆಯ ಸ್ವರೂಪಕ್ಕನುಗುಣವಾಗಿ ಭಗವಂತನೊಂದಿಗೆ ಪತಿ-ಪತ್ನಿ ಸಂಬಂಧದಲ್ಲಿ ತೊಡಗಿಸಿಕೊಳ್ಳತಕ್ಕವಳು (ಮಿಕ್ಕ ಎಲ್ಲಾ ಆಳ್ವಾರುಗಳೂ ಪುರುಷರಾಗಿ ಅವತರಿಸಿದ ಕಾರಣ ಸ್ತ್ರೀಸ್ವಭಾವವನ್ನು ಆಪಾದಿಸಿಕೊಳ್ಳಬೇಕಿತ್ತು). ಅಲ್ಲದೆ, ಆಕೆಗೆ ಭಗವಂತನಲ್ಲಿದ್ದ ಪ್ರೇಮ ಸಹಜವಾಗಿ ಉಳಿದ ಆಳ್ವಾರುಗಳ ಪ್ರೀತಿಗಿಂತ ಹೆಚ್ಚಾಗಿತ್ತು.

ಪಿಳ್ಳೈ ಲೋಕಾಚಾರ್ಯರು ತಮ್ಮ ‘ಶ್ರೀವಚನ ಭೂಷಣ’ ದಿವ್ಯಶಾಸ್ತ್ರದಲ್ಲಿ ಅಂಡಾಳ್ ವೈಭವವನ್ನು ಕೆಲವು ಸೂತ್ರಗಳಲ್ಲಿ ತಿಳಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಅನುಭವಿಸೋಣ.

  • ಸೂತ್ರ ೨೩೮  – ಬ್ರಾಹ್ಮಣೋತ್ತಮರಾನ ಪೆರಿಯಾಳ್ವಾರುಮ್ ತಿರುಮಗಳಾರುಮ್ ಗೋಪಜನ್ಮತ್ತೈ ಆಸ್ಥಾನಮ್ ಪಣ್ಣಿನಾರ್ಗಳ್ (ப்ராஹ்மணோத்தமரான பெரியாழ்வாரும்  திருமகளாரும் கோபஜந்மத்தை ஆஸ்தாநம் பண்ணினார்கள்). ಈ ಪ್ರಕರಣದಲ್ಲಿ ಪಿಳ್ಳೈಲೋಕಾಚಾರ್ಯರು ಜನ್ಮ-ವರ್ಣ ಇತ್ಯಾದಿಗಳ ಭೇದವಿಲ್ಲದೆ ಭಾಗವತರ ವೈಭವವನ್ನು ವರ್ಣಿಸುತ್ತಾರೆ. ಇದರಲ್ಲಿ ಭಗವದನುಭವ/ಕೈಂಕರ್ಯಕ್ಕೆ ಪೂರಕವಾದ ಅನೇಕ ಜನ್ಮಗಳನ್ನಪೇಕ್ಷಿಸಿದ ಅನೇಕ ಉನ್ನತ ವ್ಯಕ್ತಿಗಳ ಉದಾಹರಣೆಗಳನ್ನು ನೀಡುತ್ತಾರೆ. ಈ ಸೂತ್ರದಲ್ಲಿ ಅವರು ಪೆರಿಯಾಳ್ವಾರ್ ಮತ್ತು ಆಂಡಾಳ್ ಇಬ್ಬರೂ ಬ್ರಾಹಣೋತ್ತಮರಾಗಿ ಜನಿಸಿದ್ದರೂ ಕೂಡ ತಾವುಗಳು ಸ್ವತಃ ಬೃಂದಾವನದಲ್ಲಿ ಒಬ್ಬ ಗೋಪಿಕೆಯ ಜನ್ಮವನ್ನು ಬಹಳವಾಗಿ ಅಪೇಕ್ಷಿಸಿದರು ಎಂಬುದನ್ನು ತೋರಿದ್ದಾರೆ. ಗೋದೆಯು ಭಗವಂತನಿಗೆ ಸಂತೋಷ ಉಂಟುಮಾಡುವ ಕೈಂಕರ್ಯವೇ ನಮ್ಮೆಲ್ಲರ ಮುಖ್ಯ ಗುರಿ, ಮತ್ತು ಪ್ರತಿಯೊಬ್ಬರೂ ಅಂತಹ ಕೈಂಕರ್ಯವು ಯಾವುದೇ ರೀತಿಯದ್ದಾದರೂ ಅದರ ಮಹತ್ತ್ವವನ್ನರಿತು ಅದಕ್ಕೆ ಹಂಬಲಿಸಬೇಕು ಎಂಬುದನ್ನು ಸ್ಪಷ್ಟವಾಗಿಯೇ ತೋರಿದ್ದಾಳೆ.
  • ಸೂತ್ರ ೨೮೫ – ಕೊಡುತ್ತುಕ್ಕೊಳ್ಳಾದೇ ಕೊಂಡತ್ತುಕ್ಕುಕ್ಕೈಕ್ಕೂಲಿ ಕೊಡುಕ್ಕವೇಣುಮ್ (கொடுத்துக் கொள்ளாதே கொண்டத்துக்குக் கைக்கூலி கொடுக்கவேணும்). ಈ ಪ್ರಕರಣದಲ್ಲಿ ಪಿಳೈ ಲೋಕಾಚಾಾರ್ಯರು ಪ್ರತಿಯೊಬ್ಬರೂ ಕೈಂಕರ್ಯವನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸುತ್ತಾರೆ. ಇದು ೨೩೮ನೇ ಸೂತ್ರಕ್ಕೆ ಸಂಬಂಧಪಟ್ಟಿದೆ. ಆ ಸೂತ್ರದಲ್ಲಿ ಪಿಳ್ಳೈ ಲೋಕಾಚಾರ್ಯರು ಭಗವಂತನಿಗೆ ಪ್ರೀತಿಜನಕವಾದ ಕೈಂಕರ್ಯವನ್ನು ಮಾಡಬೇಕೆಂಬುದನ್ನು ತೋರಿದ್ದಾರೆ. ಇದರ ಹಿಂದಿನ ಸೂತ್ರದಲ್ಲಿ (೨೮೪), ಪಿಳ್ಳೈ ಲೋಕಾಚಾರ್ಯರು ಈ ಎಲ್ಲ ಕೈಂಕರ್ಯಗಳ್ಳನ್ನೂ ಯಾವುದೇ ಪ್ರತಿಫಲಗಳನ್ನಾಶಿಸದೆ ಮಾಡಬೇಕೆನ್ನುತ್ತಾರೆ – ಅರ್ಥಾತ್, ಮಾಡಿದ ಕೈಂಕರ್ಯಕ್ಕೆ ಪ್ರತಿಯಾಗಿ ಮತ್ತೊಂದು ಫಲವನ್ನು ಅಪೇಕ್ಷಿಸಬಾರದು. ಈಗ ಈ ಸೂತ್ರದಲ್ಲಿ, ನಾವು ಕೈಂಕರ್ಯವನ್ನು ಮಾಡಿ ತನ್ಮೂಲಕ ಭಗವಂತನಿಗೆ ಪ್ರೀತಿಯುಂಟಾದಾಗ ಅದನ್ನು ವರ್ಧಿಸಲು ಮತ್ತಷ್ಟು ಕೈಂಕರ್ಯ ಮಾಡಬೇಕೆನ್ನುತ್ತಾರೆ. ಮಾಮುನಿಗಳು ಈ ವಿಷಯವನ್ನು ನಮ್ಮಗೆ ನಮ್ಮಗೆ ಆಂಡಾಳ್ ಶ್ರೀಸೂಕ್ತಿಗಳ ಮೂಲಕ ಸುಲಭವಾಗಿ ತಿಳಿಸಿಕೊಡುತ್ತಾರೆ. ಆಂಡಾಳ್ ತನ್ನ ನಾಚ್ಚಿಯಾರ್ ತಿರುಮೊೞಿ೯.೭ರಲ್ಲಿ “ಇನ್ಱು ವಂದು ಇತ್ತನೈಯುಮ್ ಅಮುದುಶೆಯ್ದಿಡಪ್ಪೆರಿಲ್, ನಾನ್ ಒನ್ಱು ನೂಱಾಯಿರಾಮಗ ಕ್ಕೊಡುತ್ತು ಪಿನ್ನುಮ್ ಆಳುಮ್ ಚೆಯ್ವನ್ ” ಎನ್ನುತ್ತಾಳೆ. ಇದರ ಹಿಂದಿನ ಪಾಶುರದಲ್ಲಿ ಆಂಡಾಳ್ ತಿರುಮಾಲಿರುಂಶೋಲೈ ಅಳಗರಿಗೆ (ಸುಂದರಬಾಹು ಪೆರುಮಾಳ್) ನೂರು ಪಾತ್ರೆಗಳಷ್ಟು ಬೆಣ್ಣೆ ಮತ್ತು ನೂರು ಪಾತ್ರೆಗಳಷ್ಟು ಅಕ್ಕಾರ ಅಡಿಶಿಲ್ (ಪರಮಾನ್ನ) ಸಮರ್ಪಿಸಬೇಕೆಂದು ಸಂಕಲ್ಪಿಸುತ್ತಾಳೆ. ಈ ಪಾಶುರದಲ್ಲಿ (೯-೭) ಆಂಡಾಳ್ ತಾನು ಸಮರ್ಪಿಸಿದ್ದನ್ನು ಭಗವಂತ ಸ್ವೀಕರಿಸಿದ್ದನ್ನು ನೋಡಿ ಅವನಿಗೆ ಇನ್ನಷ್ಟು ಅಮುದು ನೀಡಲು ಹೀಗೆಯೆ ಮತ್ತಷ್ಟು ಮಗದಷ್ಟು ಸಮರ್ಪಿಸುತ್ತಲೇ ಇರುತ್ತೇನೆ ಎನ್ನುತ್ತಾಳೆ. ಇದಕ್ಕೆ ಅವನ ಪ್ರೀತಿವರ್ಧನೆಯೇ ಪ್ರತಿಫಲವೇ ಹೊರತು ಬೇರಾವ ಪ್ರತಿಫಲವನ್ನೂ ಆಕೆ ಆಶಿಸುವುದಿಲ್ಲ. ಈ ವಿಧದಲ್ಲಿ ಆಂಡಾಳ್ ಈ ಪಾಶುರದ ಮುಖಾಂತರ ಸಂಪ್ರದಾಯದ ಅತ್ಯುತ್ಕೃಷ್ಟವಾದ ಅರ್ಥವನ್ನು ಬಹಳ ಸುಲಭವಾಗಿ ತೋರಿಸಿಬಿಟ್ಟಳು.

ಆಯಿ ಜನನ್ಯಾಚಾರ್ಯರು ಅವರ ವ್ಯಾಖ್ಯಾನ ಅವತಾರಿಕೆಯಲ್ಲಿ ತಿರುಪ್ಪಾವೈ ವೈಭವವನ್ನು (ಮತ್ತು ತನ್ಮೂಲಕ ಆಂಡಾಳ್ ವೈಭವವನ್ನು) ಅದ್ಭುತವಾಗಿ ವರ್ಣಿಸಿದ್ದಾರೆ. ಅವರು ನಮಗೆ ಎರಡು ವ್ಯಾಖ್ಯಾನಗಳನ್ನು ಕರುಣಿಸಿದ್ದಾರೆ – ೨೦೦೦ ಪಡಿ ಮತ್ತು ೪೦೦೦ ಪಡಿ. ಅವರು ಅವತಾರಿಕೆಯಲ್ಲಿ ಒಂದು ಘಟನೆಯನ್ನು ವಿವರಿಸುತ್ತಾರೆ. ಒಮ್ಮೆ ಎಂಬೆರುಮಾನಾರ್‌ರ ಶಿಷ್ಯರು ಅವರಲ್ಲಿ ತಿರುಪ್ಪಾವೈ ಉಪನ್ಯಾಸವನ್ನು ಮಾಡಿ ತಮ್ಮಗೆಲ್ಲ ಅದರ ಅರ್ಥಗಳನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾರ‍ೆ. ಅದಕ್ಕೆ ಎಂಬೆರುಮಾನಾರ್ “ನಿಮಗೆ ‘ತಿರುಪ್ಪಲ್ಲಾಣ್ಡು’ ಪ್ರಬಂಧಕ್ಕೆ ಅರ್ಥವನ್ನು ಹೇಳಲು ಮತ್ತು ಕೇಳಲು ಜನ ಸಿಗುತ್ತಾರೆ, ಆದರೆ ‘ತಿರುಪ್ಪಾವೈ’ಗೆ ಅರ್ಥವನ್ನು ಹೇಳಲೋ ಕೇಳಲೋ ಜನ ಸುಲಭದಲ್ಲಿ ಸಿಗರು” ಎನ್ನುತ್ತಾರ‍ೆ. ಇದರ ಅರ್ಥ- ಪೆರಿಯಾಳ್ವಾರ್‌ರು ತಿರುಪ್ಪಲ್ಲಾಣ್ಡನ್ನು ಭಗವಂತನಿಗೆ ಮಂಗಳಾಶಾಸನವಾಗಿ (ಪ್ರಥಮ ಪರ್ವ-ಮೊದಲ ಹಂತ) ಹಾಡಿದ್ದಾರೆ. ಇದೇ ನಿಷ್ಠೆಯಲ್ಲಿರುವ ಅನೇಕರು ನಮ್ಮಗೆ ಸುಲಭದಲ್ಲಿ ದೊರಕಬಹುದು.  ಆದರೆ ತಿರುಪ್ಪಾವೈಯನ್ನು ಆಂಡಾಳ್ ಭಾಗವತರಿಗೆ ಮಂಗಳಾಶಾಸನವಾಗಿ (ಚರಮ ಪರ್ವ – ಅಂತಿಮ ಹಂತ) ಹಾಡಿದ್ದಾಳೆ. ಈ ಉತ್ತಮ ನಿಷ್ಠೆಯಲ್ಲಿರುವ ಜನರು ಸಿಗುವುದು ಬಹಳ ದುರ್ಲಭ ಎಂಬುದಾಗಿದೆ. “ಗಂಡಸರು ತಿರುಪ್ಪಾವೈಯನ್ನು ಕೇಳಲು ಮತ್ತು ವಿವರಿಸಲು ಯೋಗ್ಯರಲ್ಲ” ಎನ್ನುತ್ತಾರೆ ಎಂಬೆರುಮಾನಾರ್. ಇದರರ್ಥ- ತನ್ನ ಗಂಡನ ಮೇಲೆ ಅವಲಂಬಿತಳಾದ ಸ್ತ್ರೀಯಂತೆ ಒಬ್ಬನಿಗೆ ಭಗವಂತನ ಮೇಲೆ ಸಂಪೂರ್ಣವಾದ ಅವಲಂಬನೆಯ ಅರಿವು ಮೂಡಿದರೆ, ಆಗ ಮಾತ್ರ ತಿರುಪ್ಪಾವೈಯಲ್ಲಿ ಹೇಳಿರುವ ಗೂಢಾರ್ಥಗಳು ಗೋದೆಯ ಮನಸ್ಸಿಗೆ ಅನುಸಾರವಾಗಿ ಗೋಚರವಾಗುತ್ತದೆ ಎಂಬುದಾಗಿದೆ.  ಅಷ್ಟೇ ಅಲ್ಲದೆ, “ಸ್ತ್ರೀಯರಲ್ಲೂ ಸಹ, ನಿತ್ಯ ಭಗವಂತನ ಅನುಭವವನ್ನೇ ಅಪೇಕ್ಷಿಸುವ (ಮತ್ತು ಅದರಂತೆಯೇ ಆ ಅನುಭವದಲ್ಲೇ ಮುಳುಗಿರುವ) ಸಾಕ್ಷಾತ್ ಭಗವಂತನ ದಿವ್ಯಮಹಿಷಿಯರೇ ಕೂಡ ಸುಲಭದಲ್ಲಿ ತಿರುಪ್ಪಾವೈ ಅರ್ಥಗಳನ್ನು ವಿವರಿಸಲೋ ಕೇಳಲೋ ಸಾಧ್ಯವಿಲ್ಲ. ಎಲ್ಲಾ ಆಳ್ವಾರುಗಳ ಉತ್ತಮ ಅಂಶಗಳ ರಾಶಿಯಾದ ಅಂಡಾಳ್ ಮಾತ್ರವೇ ತಿರುಪ್ಪಾವೈನ ಮೂಲ ಅರ್ಥವನ್ನು ಮತ್ತು ಅದರ ಭಾವನ್ನು ತೋರಬಲ್ಲಳು” ಎನ್ನುತ್ತಾರೆ ಎಂಬೆರುಮಾನಾರ್. ಆಂಡಾಳ್‌ ಮತ್ತು ಅವಳ ತಿರುಪ್ಪಾವೈಗೆ ಅಷ್ಟರ ಮಟ್ಟಿಗೆ ಮಹಿಮೆಯಿದೆ.

ಮಾಮುನಿಗಳು ಸಹ ಆಂಡಾಳ್‌ನ ಹಿರಿಮೆಯನ್ನು ತನ್ನ ಉಪದೇಶ ರತ್ತಿನಮಾಲೈಯಲ್ಲಿ ೨೨, ೨೩ ಮತ್ತು ೨೪ನೇ ಪಾಶುರಗಳಲ್ಲಿ ತೋರಿದ್ದಾರೆ.

  • ೨೨ನೇ ಪಾಶುರದಲ್ಲಿ ಮಾಮುನಿಗಳು ತನ್ನನ್ನು ರಕ್ಷಿಸಲು ಆಂಡಾಳ್ ಪರಮಪದದ ಅತ್ಯುನ್ನತವಾದ ಆನಂದವನ್ನು ಬೀಸುಟು ಈ ಸಂಸಾರಮಂಡಲದಲ್ಲಿ ಪೆರಿಯಾಳ್ವಾರರ ಮಗಳಾಗಿ ಜನಿಸಿದಳು (ಸ್ವಾನುಭವ) ಎಂದು ಭಾವುಕರಾಗುತ್ತಾರೆ. ಹೇಗೆ ಒಬ್ಬ ತಾಯಿಯು ನೀರಿನಲ್ಲಿ ಮುಳುಗುತ್ತಿರುವ ತನ್ನ ಮಗುವನ್ನು ರಕ್ಷಿಸಲು ತಾನೇ ನೀರಿಗೆ ಧುಮ್ಮುಕುವಳೋ, ಹಾಗೆಯೇ ಎಲ್ಲರಿಗೂ ತಾಯಿಯಾದ ಅಂಡಾಳ್ ಸಂಸಾರದಲ್ಲಿ ಮುಳುಗುತ್ತಿರುವ ಜೀವಿಗಳನ್ನು ರಕ್ಷಿಸಲು ತಾನೇ ಈ ಸಂಸಾರಕ್ಕೆ ಬಂದಳು.
  • ೨೩ನೇ ಪಾಶುರದಲ್ಲಿ ಅವರು ಹೇಗೆ ಗೋದೆಗೆ ಮತ್ತೊಬ್ಬರು ಸಮನಾಗಲಾರರೋ, ಹಾಗೆಯೇ ಗೋದೆಯ ಜನ್ಮ ದಿನವಾದ “ತಿರುವಾಡಿಪ್ಪೂರo”ಕ್ಕೂ ಸರಿಸಮನಾದ ದಿನ ಬೇರಿಲ್ಲ ಎನ್ನುತ್ತಾರೆ.
  • ೨೪ನೆಯ ಪಾಶುರದಲ್ಲಿ ಅಂಡಾಳ್ “ಅಂಜು ಕುಡಿ”ಗೆ ಸಂತತಿ ಎಂದೂ, ಅವಳು ಉಳಿದ ಆಳ್ವಾರ್‌ಗಳಿಗಿಂತಲೂ ಮೇಲಾದವಳೆಂದೂ ಹೇಳಿ, ಆಕೆ ಅತಿಚಿಕ್ಕ ಪ್ರಾಯದಲ್ಲೇ ಭಗವಂತನಲ್ಲಿ ಅಪಾರಪ್ರೀತಿ ಬೆಳೆಸಿಕೊಂಡಿದ್ದನ್ನು ತೋರಿದ್ದಾರೆ. ಪಿಳ್ಳೈಲೋಕಂ ಜೀಯರ್ ತಮ್ಮ ವ್ಯಾಖ್ಯಾನದಲ್ಲಿ “ಅಂಜು ಕುಡಿಯ ಸಂತತಿ” ಎಂಬುದರ ಅರ್ಥವನ್ನು ಹೀಗೆ ವಿವರಿಸಿದ್ದಾರೆ:
  • ಪಂಚಪಾಂಡವರ ಕುಲದಲ್ಲಿ ಜನಿಸಿದ ಪರೀಕ್ಷಿತನಂತೆ ಎಲ್ಲ ಆಳ್ವಾರುಗಳಿಗೂ ಸೇರಿದ ಕುಲದಲ್ಲಿ ಜನಿಸಿದ ಸಂತತಿ.
  • ಪ್ರಪನ್ನ ಕುಲಕ್ಕೆ ಸೇರಿದ ಆಳ್ವಾರ್‌ಗಳ ಸಂತತಿ.
  • ಸದಾಕಾಲವೂ ಭಗವಂತನ ಯೋಗಕ್ಷೇಮದ ಬಗ್ಗೆಯೇ ಚಿಂತೆಯಿಂದಿರುವ (ಅಚ್ಚಮ್=ಭಯ/ಚಿಂತೆ; ಅಂಜುಕುಡಿ=ಅಂಜುವವರು), ಮತ್ತು ಅದೇ ಕಾರಣಕ್ಕೆ ಸದಾ ಭಗವಂತನಿಗೆ ಮಂಗಳಾಶಾಸನಪರರಾಗಿರುವ ಪೆರಿಯಾಳ್ವಾರ್‌ರ ಸಂತತಿ.
  • ಆಂಡಾಳಿನ ಆಚರ್ಯ ನಿಶ್ಟೆ ಪರಿಶುದ್ದವಾದದು. ಆಂಡಾಳ್ ಎಂಬೆರುಮಾನನ್ನು ಪ್ರೀತಿಯಿಂದ ಕೊಂಡಾಡಿದ್ದಾರೆ. ಅದಕ್ಕೆ ಕಾರಣ ಪೆರಿಯಾೞ್ವಾರರು ಮತ್ತು ಎಲ್ಲಾ ಅಲ್ವಾರಿನ ಎಂಪೆರುಮಾನಿನ  ಮೇಲೆ ಇರುವ ಮಮತೆಯೆ ಮತ್ತು ಪ್ರೇಮವೇ. ಇದನ್ನು ನಾವು ಇಲ್ಲಿ ನೋಡಬಹುದು:
  • ನಾಚಿಯಾರ್ ತಿರುಮೊೞಿ, ಪಾಸುರಮ್ ೧೦.೧೦ನಲ್ಲಿ, ಆಂಡಾಳ್ “ವಿಲ್ಲಿಪುತುವೈ ವಿಟ್ಟುಚಿತ್ತರ್ ತಂಗಳ್ ದೇವರೈ ವಲ್ಲ ಪರಿಸು ವರುವಿಪ್ಪರೇಲ್ ಅದು ಕಾಂಣ್ಡುಮೇ (வில்லிபுதுவை விட்டுசித்தர் தங்கள் தேவரை வல்லபரிசு வருவிப்பரேல் அதுகாண்டுமேಎಂದು ಹೇಳಿದ್ದಾರೆ . ಪೆರಿಯಾೞ್ವಾರ್   ಎಂಪೆರುಮಾನನ್ನು ಇಲ್ಲಿಗೆ ಬರಲು ಒಪ್ಪಿಸಿದರು , ತಾನು ಕೂಡ ಪೂಜಿಸುತ್ತೇನೆ ಎಂದರು.
  • ಮಾಮುನಿಗಳ್ ತಮ್ಮ ಉಪದೇಶರತ್ತಿನ  ಮಾಲೈಯಲ್ಲಿ, ೧೦ ಆೞ್ವಾರ್ಗಳ ಬಗ್ಗೆ ವಿವರಿಸಿದ ಮೇಲೆ; ಆಂಡಾಳ್, ಮಧುರಕವಿ ಆೞ್ವಾರ್ ಮತ್ತು ಎಂಪೆರುಮಾನರ್ ಬಗ್ಗೆ ವಿವರವಾಗಿ ಹೇಳಿದ್ದಾರೆ , ಎಕೆಂದರೆ ಈ ಮೂವರು ಆಚಾರ್ಯ ನಿಷ್ಟರು.

ಈಗ ನಾವು ಆಂಡಾಳ್ ಚರಿತ್ರೆಯನ್ನು ನೋಡೋಣ.

ಆಂಡಾಳ್ ಶ್ರೀವಿಲ್ಲಿಪುತ್ತೂರ್ನಲ್ಲಿ ಜನಿಸಿದರು (ಈಗ ನಾಚಿಯಾರ್ ಸನ್ನಿಧಿಯಾಗಿದೆ) ತುಳಸಿ ಮಾಡದ ಹತ್ತಿರ. ಸೀತಾ ಪಿರಾಟ್ಟಿ ಹೇಗೆ ಭೂಮಿಯಿಂದ (ಜನಕ ಮಹಾರಾಜ ಭೂಮಿ ಉಳುವಾಗ) ಅವತರಿಸಿದರು, ಅದರಿಂದ ಸೀತಾಯೆಂದು ಹೆಸರಿಟ್ಟರು. ಹಾಗೆಯೇ  ಪೆರಿಯಾೞ್ವಾರ್ ಆಂಡಾಳು ಕೂಡ ಭೂಮಿ ಪಿರಾಟ್ಟಿಯ ಅವತಾರ ತುಳಸಿ ಮಾಡದ ಹತ್ತಿರ ಮತ್ತು ಅವರನ್ನು ಕೋದೈಯಂದು(ಕೋದೈಯಂದರೆ ಮಾಲೈ/ಹೂವಿನ ಹಾರ) ಹೆಸರಿಟ್ಟರು.

ಅವರು ಚಿಕ್ಕ ವಯಸಿನಿಂದಲೆ, ಪೆರಿಯಾೞ್ವಾರಿಂದ ಎಂಪೆರುಮಾನಿನ ಲೀಲೆಗಳನ್ನು ತಿಳಿದುಕೊಂಡೆ ಬೆಳೆದರು. ಪೆರಿಯಾೞ್ವಾರವರು ಹೂವಿನ ಹಾರವನ್ನು ನಿತ್ಯವು ಕಟ್ಟಿ ಮತ್ತು ಅದನ್ನು ವಟ ಮಹಾಧಾಮ (ವಟ ಪೆರುಂ ಕೊಯಿಲುಡಯಾನ್ ಎಂದು ತಮಿೞಿನಲ್ಲಿ). ಆಂಡಾಳ್ ಎಂಪೆರುಮಾನಿನ  ಮೇಲೆ ತುಂಬ ಪ್ರೇಮದಿಂದಿದರು ಮತ್ತು ಅವರನ್ನೆ ಮದುವೆಯಗಲು ಬಯಸಿದರು. ಒಮ್ಮೆ ಪೆರಿಯಾೞ್ವರಿನ ಗೈರುಹಾಜರಿಯಲ್ಲಿ, ಆಂಡಾಳ್, ಎಂಪೆರುಮಾನಿಗೆ  ಸಮರ್ಪಿಸ ಬೇಕಾದ ಹೂವಿನ ಹಾರವನ್ನು  ಧರಿಸಿಕೊಂಡು ಮತ್ತು ಆ ,ಹಾರ ತನಗೆ  ಸರಿಯಾಗಿದೆಯ ಮತ್ತು ತಾನು ಎಂಪೆರುಮಾನಿಗೆ ಸರಿಯಾದ ಜೊಡಿಯೆ ಎಂದು ಪರೀಕ್ಷಿಸದರು . ಪೆರಿಯಾೞ್ವಾರ್ ಬಂದಮೇಲೆ ಹಾರವನ್ನು ಎಂಪೆರುಮಾನಿಗೆ ಸಮರ್ಪಿಸಿದರು. ಇದು ಹೀಗೆ ನಡೆಯುತ್ತಿತ್ತು  , ಒಂದು ದಿನ ಆಂಡಾಳ್ ಎಂಪೆರುಮಾನಿಗೆ ಸಮರ್ಪಿಸುವ ಹಾರವನ್ನು ಧರಿಸಿರುವುದನ್ನು ಕಂಡು, ಅವರು ತುಂಬಾ ಕೋಪಗೊಂಡರು. ಅವರು ದುಃಖದಿಂದ ಆದಿನ ಎಂಪೆರುಮಾನಿಗೆ ಹಾರವನ್ನು ಸಮರ್ಪಿಸಲಿಲ್ಲ. ಅ ರಾತ್ರಿ ಎಂಪೆರುಮಾನ್ ಪೆರಿಯಾೞ್ವಾರಿನ ಕನಸಿನಲ್ಲಿ ಬಂದು, ಏಕೆ ಹಾರವನ್ನು ತೆಗೆದುಕೊಂಡು ಬರಲಿಲ್ಲ ಎಂದು ಕೇಳಿದರು . ಆೞ್ವಾರು, ತಮ್ಮ ಮಗಳಾದ ಆಂಡಾಳ್ ಎಂಪೆರುಮಾನಿಗೆ  ಸಮರ್ಪಿಸ ಬೇಕಾದ ಹಾರವನ್ನು ತನ್ನು ಧರಿಸಿಕೊಂಡಿದರಿಂದ, ಅ ಹಾರವು ಎಂಪೆರುಮಾನಿಗೆ ಯೋಗ್ಯವಲ್ಲದಾಗಿದೆ ಎಂದರು. ಆಗ ಎಂಪೆರುಮಾನ್ ತಮ್ಮಗೆ ಆಂಡಳ್ ಮೊದಲು ಧರಿಸಿದ ಮಾಲೆಯಲ್ಲಿ ವಿಶೇಷವಾದ ಭಕ್ತಿಯಿದು, ಅದು ತಮ್ಮಗೆ ತುಂಬಾ ಪ್ರೀತಿ ಪಾತ್ರವಾಗಿದೆ ಎಂದರು. ಇದನ್ನು ಕೇಳಿದ ಆೞ್ವಾರು ತುಂಬಾ ಸಂತುಷ್ಟಗೊಂಡರು ಮತ್ತು ಆನಂತರ ಅವರಿಗೆ ಆಂಡಾಳ್ ಮೇಲೆ ಸ್ನೇಹ ಮತ್ತು ಆದರ ದಿಂದಿದರು. ತದನಂತರ, ಪ್ರತಿ ದಿನವು ಅವರು ಆಂಡಳಿಗೆ ಮೊದಲು ಮಾಲೆಯನ್ನು ಕೊಟ್ಟಿದ ಮೇಲೆ ಎಂಪೆರುಮಾನಿಗೆ ಮಾಲೆಯನ್ನು ಸಮರ್ಪಿಸುತ್ತಾರೆ.

ಆಂಡಾಳ್ ನಾಚಿಯಾರರು ಎಂಪೆರುಮಾನಿನ ಮೇಲೆ ಇರುವ ಪರಮ ಭಕ್ತಿಯಿಂದ ಜನಿಸಿದರು, ಏಕೆಂದರೆ ಅವರು ಭೂಮಿ ಪಿರಾಟ್ಟಿಯ ಅಂಶ. ಎಂಪೆರುಮಾನಿನ  ಕಡೆಗೆ ಇರುವ ಅವರ ಪ್ರೇಮ ಮತ್ತೆಲ್ಲಾ ಆಲ್ವಾರ್ಗಳಿಗಿಂತಲೂ ತುಂಬಾ ಅಪಾರವದದು.  ಎಂಪೆರುಮಾನ್ನಿಂದ ಅಗಲಿಕೆಯನ್ನು ತಾಳಲಾರದೆ,ಆಂಡಳ್ರವರು ಅವರನ್ನು ಮದುವೆಯಾಗಲು ದಾರಿಯನ್ನು ಹುಡುಕಲು ತೊಡಗಿದರು. ರಾಸಲೀಲೈಯಿನ ಸಂದರ್ಭದಲ್ಲಿ, ಗೋಪಿಯರು ಕಣ್ಣನ್ ಎಂಪೆರುಮಾನಿನ ಗೈರುಹಜರಿಯಲ್ಲಿ ಯಾವ ದಾರಿಯನ್ನು ಅರಿಸಿದರೋ, ಅದನ್ನೇ ಆಂಡಾಳ್ ಕೂಡ ಪಾಲಿಸಿದರು. ಆಂಡಾಳ್ ವಟ ಪೆರುಂ ಕೊಯಿಲುಡಯಾನ್ನನ್ನು ಕಣ್ಣನ್ಎಂದು  ಭಾವಿಸಿ, ನಂದಗೋಪನ ಮನೆಯೆ ಅವರ ದೆಗುಲವೆಂದು,    ಶ್ರೀವಿಲ್ಲಿಪುತ್ತೂರ್ ಗೋಕುಲವೇ ಎಂದು ಮತ್ತು ಅವರ ಸ್ನೆಹಿತರೆ ಗೋಪಿಯರೆಂದುಕೊಂಡರು. ಆಮೇಲೆ ತಿರುಪ್ಪಾವೈಯನ್ನು ಹಾಡಿದರು.

ತಿರುಪ್ಪಾವೈನಲ್ಲಿ ಆಂಡಾಳ್ ಈ ಕೆಳಗಿನ ವಿಷಯವನ್ನು ಹೇಳಿದ್ದಾರೆ:

  • ಎಂಪೆರುಮಾನನ್ನು ಪ್ರತಿಪಾಲಿಸು ಪ್ರಾಪ್ಯಮ್ (ಗುರಿ) ಮತ್ತು ಪ್ರಾಪಕಮ್ (ದಾರಿ) ಮಾತ್ರವೇ .
  • ಶ್ರೀವೈಷ್ಣವರು ಏನು ಮಾಡಬೇಕು ಏನು ಮಾಡ ಬಾರದು ಎಂದು ಪೂರ್ವಾಚಾರ್ಯಗಳ ಅನುಷ್ಟಾನದಲ್ಲಿ  (ಸಿಸ್ಟಾಚಾರ) ಹೇಳಿದ್ದಾರೆ.
  • ಭಗವತ್ ಅನುಭವವು ಎಲ್ಲಾರೂ ಕೂಡಿ ಮಾಡಬೇಕೆಂದು (ಒಬ್ಬರೆ ಮಾಡಿದರೆ ಅದು ಸ್ವಾರ್ಥವಾಗುತ್ತೆ), ಅವರು ೧೦ ಗೋಪಿಯರನ್ನು ಕಣ್ಣನನ್ನು ನೋಡಲು ಬರಬೇಕೆಂದು ಏಲ್ಲಿಸುತ್ತಾರೆ .
  • ಎಂಪೆರುಮಾನಿನ ಹತ್ತಿರ ಹೋಗಲು ನಾವು ದ್ವಾರ ಪಾಲಕರು, ಬಲರಾಮ, ಯಶೋದೈ, ನಂದಗೋಪರು, ಮತ್ತು ಇತ್ತರರ ಸಹಾಯ ನಮಗೆಬೇಕು.
  • ಎಂಪೆರುಮಾನಿನ ಹತ್ತಿರ ಹೋಗಲು ನಮಗೆ ಪಿರಾಟ್ಟಿಯ (ಪುರುಶಕಾರ) ದಯೇ ಬೇಕು.
  • ನಾವು ಯವಾಗಲು ಎಂಪೆರುಮಾನಿಗೆ ಮಂಗಳಾಸಾಸನವನ್ನು ಮಾಡಬೇಕು.
  • ಕೈಂಕರ್ಯವೇ ಜೀವಾತ್ಮಾವಿನ ಸ್ವರೂಪ. ಆದರಿಂದ ಎಂಪೆರುಮಾನಿನ ಹತ್ತಿರ ಕೈಂಕರ್ಯ ಪ್ರಾರ್ತನೆ ಮಾಡಬೇಕು.
  • ಎಂಪೆರುಮಾನೆ ಕೈಂಕರ್ಯ ಸಿಗಲು ಉಪಾಯ. ನಮ್ಮ ಅಲ್ಪ ಪ್ರಯತ್ನ ಉಪಾಯವೆಂದು ತಿಳೀಯಬಾರದು.
  • ಕೈಂಕರ್ಯವನ್ನು ಎಂಪೆರುಮಾನಿನ ಸಂತೋಷಕ್ಕಾಗಿ ಮಾತ್ರವೇ. ಕೈಂಕರ್ಯ ಮಾಡುವದರಿಂದ ನಾವು ಪ್ರತಿ ಫಲವನ್ನು ಬಯಸಬಾರದು.

ಇಷ್ಟಾದರೂ , ಎಂಪೆರುಮಾನ್  ಆಂಡಾಳನ್ನು ಅಂಗೀಕರಿಸಲಿಲ್ಲ . ಆಂಡಾಳ್ ತಾಳಲಾರದ ದುಃಖದಿಂದ, ಎಂಪೆರುಮಾನನ್ನು ತನ್ನ ನಾಚಿಯಾರ್ ತಿರುಮೋೞಿಯಲ್ಲಿ ಕರೆಯುತ್ತಾಳೆ . ನಮ್ಮ ಸಂಪ್ರದಾಯದಲ್ಲಿ ಇರುವ ಸುಮಾರು ಎಲ್ಲ ತತ್ವಗಳನ್ನು ನಾಚಿಯಾರ್  ತಿರುಮೋೞಿನಲ್ಲಿ ತಿಳಿಸಿದ್ದಾರೆ . ನಾಚಿಯಾರ್ ತಿರುಮೋೞಿಯಿನ ಅರ್ಥವನ್ನು ಆಲಿಸು ಅಥವ ವಾಚನಮಾಡಲು ಮನಸ್ಸು ತುಂಬಾ ಪಕ್ವಪಡದಿರಬೇಕು. ಈದರಲ್ಲಿ ಅವರು “ಮಾನಿಡವರ್ಕ್ಕೆನ್ಱು ಪೇಚ್ಚುಪ್ಪಡಿಲ್ ವಾೞಗಿಲ್ಲೇನ್” (மானிடவர்க்கென்று பேச்சுப்படில் வாழகில்லேன்) ಅಂದರೆ “ಯಾರಾದರು ತಮ್ಮನ್ನು ಎಂಪೆರುಮಾನನ್ನು ಬಿಟ್ಟು ಬೇರೆಯವರಿಗೆ ಮದುವೆ ಮಾಡಲು ಬಯಸಿದರೆ, ತಮ್ಮ ಪ್ರಾಣವನ್ನು ತ್ಯಜಿಸುತ್ತಾರೆ” ಎಂದು ಹೇಳಿದ್ದಾರೆ. ಅವರು ವಾರಣಮ್ ಆಯಿರಮ್ ಪದಿಗದಲ್ಲಿ(೯.೬), ಎಂಪೆರುಮಾನಿನ ಜೊತೆ ತಮ್ಮ ಮದುವೆಯಾಗುವಂತೆ ಕನಸ್ಸು ಕಾಣುತ್ತಾರೆ. ಪೆರಿಯಾೞ್ವಾರ್ ಆಂಡಾಳ್ಗೆ ಎಂಪೆರುಮಾನಿನ ಅರ್ಚಾವತಾರ ವೈಭವವನ್ನು ವಿವರಿಸುತ್ತಾರೆ. ಆದರಿಂದ ಆಂಡಾಳ್ ತಿರುವರಂಗನಾಥನ ಮೇಲೆ ತುಂಬಾ ಪ್ರೇಮ ಬೆಳೆಸಿಕೊಳ್ಳುತ್ತಾರೆ. ಆೞ್ವಾರ್ಗೆ ಆಂಡಾಳಿನ ಅಭಿಲಾಷೆಯನ್ನು ಹೇಗೆ ನೆರವೇರಿಸಬೇಕು ಎಂದು ಆತಂಕಗೊಳ್ಳುತ್ತಾರೆ. ಒಮ್ಮೆ ತಮ್ಮ ಕನಸ್ಸಿನಲ್ಲಿ ಬಂದ ತಿರುವರಂಗನಾಥನು, ಆಂಡಾಳನ್ನು ಶ್ರೀರಂಗಮೇ  ಕರೆತರಲು ಹೇಳುತ್ತಾರೆ. ಈ ಪ್ರಕಾರ ತಿರುವರಂಗನಾಥನು ಆಂಡಾಳಿನ ಜೊತೆ ಮದುವೆಯಾಗಲು. ಆೞ್ವಾರ್ರು ತುಂಬಾ ಸಂತೋಷಗೊಳ್ಳುತ್ತಾರೆ. ಈ ಮಧ್ಯದ ಕಾಲದಲ್ಲಿ ಶ್ರೀರಂಗನಾಥನು ಸುಂದರವಾದ ಪಲಕ್ಕು, ಚಾಮರ, ಕೊಡೆ ಮತ್ತು ಅವರ ಕೈಂಕರ್ಯರ್ತಿಗಳನ್ನು ಶ್ರೀವಿಲ್ಲಿಪುತ್ತೂರಿಗೆ ಆಂಡಾಳನ್ನು ಕರೆತರಲು ಹೇಳುತ್ತಾರೆ. ಆೞ್ವಾರ್ರು, ವಟ ಪೆರುಂ ಕೊಯಿಲುಡಯ ಪೆರುಮಾಳಿನ ಅನುಮತಿಪಡೆದು, ಶ್ರೀರಂಗಮೇ ಆಂಡಾಳ್ ಜೊತೆ ಪಲಕ್ಕಿನಲ್ಲಿ ವಾದ್ಯ ಮತ್ತು ಭರ್ಜರಿಯಾದ ಮೆರವಣಿಗೆಯ ಜೊತೆ ಹೊರಡುತ್ತಾರೆ.

ಶ್ರೀರಂಗಮೇ ಬಂದಮೇಲೆ, ಸುಂದರವಾಗಿ ಅಲಂಕಾರ ಮಾಡಿಕೊಂಡ ಆಂಡಾಳ್, ದೇವಸ್ಥಾನದ ಮುಂದೆ ಪಲಕ್ಕಿನಿಂದ ಹೊರಬಂದು, ಪೆರಿಯ ಪೆರುಮಾಳಿನ ಗರ್ಭಗೃಹವನ್ನು ಪ್ರವೇಷಿ, ಎಂಪೆರುಮಾನನ್ನು ನಮಸ್ಕರಿಸುತ್ತಾರೆ. ತಕ್ಷಣವೆ ಆಂಡಾಳ್ರವರು ಪರಮಪದವನ್ನು ಸೇರುತ್ತಾರೆ.

periyaperumal-andalತದನಂತರ ಈ ಪ್ರಸಂಗವನ್ನು ನೋಡಿದ ಎಲ್ಲರು ಅಚ್ಚರಿಗೊಂಡರು ಮತ್ತು ಪೆರಿಯಾೞ್ವಾರನ್ನು ಪ್ರಶಂಶಿಸುತ್ತಾರೆ. ತಕ್ಷಣ ಪೆರಿಯಾ  ಪೆರುಮಾಳ್, ಪೆರಿಯಾೞ್ವಾರನ್ನು ತಮ್ಮ ಮಾವನಾಗಿ ಸ್ವೀಕರಿಸಿ ಗೌರವಿಸುತ್ತಾರೆ (ಸಮುದ್ರರಾಜ ನಂತೆ). ಆಮೇಲೆ ಪೆರಿಯಾೞ್ವಾರು ಶ್ರೀವಿಲ್ಲಿಪುತ್ತೂರಿಗೆ ಬಂದು ತಮ್ಮ ಕೈಂಕರ್ಯವನ್ನು ವಟ ಪೆರುಂ ಕೊಯಿಲುಡಯಾನ್ಗೆ ಮುಂದುವರಿಸುತ್ತಾರೆ.

ಆಂಡಾಳರ ಮಿತಿಯಿಲ್ಲದ ಕೀರ್ತಿಯನ್ನು ಎಷ್ಟು ಸಲಾ ಕೇಳಿದರು /ಹೇಳಿದರು (ಕಡೆಪಕ್ಷ ಒಮ್ಮೆ ಧನುರ್ ಮಾಸದಲ್ಲಿ ), ಅದು ಹೊಸದಂತೆ ಅನಿಸುತ್ತದೆ . ಅವರ ಪ್ರಭಂದದಲ್ಲಿ  ಅತಿ ಶ್ರೇಷ್ಠವಾದ ಸಿದ್ಧಾಂತ(ತತ್ವ)ವನ್ನು, ನಾವು ಕಾಣಬಹುದು.

ಆಂಡಾಳರ ಮತ್ತು ತಿರುಪ್ಪಾವೈಯಿನ ಮಹಿಮೆಯನ್ನು ನಾವು ಭಟ್ಟರ್ರವರ ಸರ್ವೋತ್ಕೃಷ್ಟವಾದ ಮಾತಿನ್ನಲ್ಲಿ ತಿಳಿಯಬಹುದು.  ಭಟ್ಟರವರು  ಪ್ರತಿಯೊಬ್ಬರು ಪ್ರತಿನಿತ್ಯವು ೩೦ ಪಾಸುರಗಳನ್ನು ಪಠಣೆಮಾಡಬೇಕು ಎಂದು ಹೇಳಿದ್ದಾರೆ. ಅದು ಸಾಧ್ಯವಗದಿದಲ್ಲಿ, ಪ್ರತಿಯೊಬ್ಬರು “ಚಿಱ್ಱಮ್ ಚಿರುಕಾಲೇ” ಪಾಸುರವನ್ನು ಪಠಣೆಮಾಡಬೇಕು. ಇದು ಕೂಡ ಸಾದ್ಯವಗದಿದಲ್ಲಿ, ಕಡೆಪಕ್ಷ ಪ್ರತಿಯೊಬ್ಬರು ಭಟ್ಟರನ್ನು(ತಿರುಪ್ಪಾವೈಯಿನ ಮೇಲಿನ ನನ್ಟು) ನೆನೆಸಿಕೊಳ್ಳಬೇಕು – ಇದರಿಂದ ಎಂಪೆರುಮಾನ್ ಸಂತೋಷಗೊಳ್ಳುತ್ತಾನೆ. ಹೇಗೆ ಹಸುವಿನ ಸ್ತನ ಕರುವನ್ನು ನೋಡಿ ಹಾಲು ಸೋರುತೋ ಹಾಗೆಯೇ,  ಎಂಪೆರುಮಾನ್, ೧ ಪಾಸುರವನ್ನೊ ಅಥವ ೩೦ ಪಾಸುರವನ್ನೊ ಅಥವ ಭಟ್ಟರನ್ನು ನೆನಸಿಕೊಳ್ಳುವುದೊ ಮಾಡಿದರೆ, ನಮಗೆ ಎಂಪೆರುಮಾನ್  ಕರುಣೆಯ ಮಳೆಯಲ್ಲಿ ನೆನೆಯುತೇವೆ. ಎಕೆಂದರೆ ಆಂಡಾಳು (ಭೂಮಿ ಪಿರಾಟ್ಟಿಯಗಿ) ವರಾಹ ಎಂಪೆರುಮಾನನ್ನು ಬೇಡುತ್ತಾಳೆ. ಭೂಮಿ ಪಿರಾಟ್ಟಿಯ ಕರುಣೆಯಿoದ, ಆಂಡಾಳು ಈ ಸಂಸಾರದಲ್ಲಿ  ಜನಿಸಿದರು ಮತ್ತು ತಿರುಪ್ಪಾವೈಯನ್ನು ಹಾಡಿದರು. ಇದರಿಂದ ನಮ್ಮಗೆ ಎಂಪೆರುಮಾನಿನ  ದಿವ್ಯ ಅನುಗ್ರಹವನ್ನು ಮತ್ತು ಈ ಸಂಸಾರದಿಂದ ನಮ್ಮಗೆ ಮುಕ್ತಿ ಹಾಗು ಭಗವತ್ ಅನುಭವ/ಕೈಂಕರ್ಯವನ್ನು ಪರಮಪದದಲ್ಲಿ ಸಿಗುತ್ತದೆ.

ಆಂಡಾಳರ ತನಿಯನ್
ನೀಳಾ ತುಂಗ ಸ್ತನಗಿರಿ ತಟೀ ಸುಪ್ತಮ್ ಉತ್ಪೋದ್ಯ ಕೃಷ್ಣಂ
ಪಾರಾರ್ಥ್ಯಂ ಸ್ವಂ ಶ್ರುತಿ ಶತ ಶಿರಸ್ ಸಿದ್ದಮ್ ಅಧ್ಯಾಪಯಂತೀ|
ಸ್ವೋಚ್ಛಿಷ್ಟಾಯಾಂ ಸ್ರಜಿನಿಗಳಿತಂ ಯಾಬಲಾತ್ ಕ್ರುತ್ಯ ಭುಂಕ್ತೇ
ಗೋದಾ ತಸ್ಯೈ ನಮ ಇದಮಿದಮ್ ಭೂಯ ಏವಾಸ್ತು ಭೂಯ:||

நீளா துங்க ஸ்தனகிரி தடீ ஸுப்தம் உத்போத்ய க்ருஷ்நம்
பாரார்த்யம் ஸ்வம் ஸ்ருதி சத சிரஸ் சித்தம் அத்யாபயந்தீ
ஸ்வோசிஷ்டாயாம் ச்ரஜிநிகளிதம் யாபலாத் க்ருத்ய புங்க்தே
கோதா தஸ்யை நம இதம் இதம் பூய ஏவாஸ்து பூய:

ಅವರ ಅರ್ಚಾವತಾರ ಅನುಭವನ್ನು ಇಲ್ಲಿ ವಿವರಿಸಿದಾರೆ – http://ponnadi.blogspot.in/2012/10/archavathara-anubhavam-andal-anubhavam.html.

ಅಡಿಯೇನ್ ರಾಮಾನುಜ ದಾಸನ್

ಸೌಮ್ಯಲತಾ

ಮೂಲ: http://acharyas.koyil.org/index.php/2012/12/16/andal-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org