ಎಂಬಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://acharyas.koyil.org/index.php/2018/02/26/emperumanar-kannada/) ನಾವು ಎಂಬೆರುಮಾನಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ಎಂಬಾರ್– ಮಧುರಮಂಗಲಂ

ತಿರುನಕ್ಷತ್ರಂ: ತೈ, ಪುನರ್ ಪೂಸಂ

ಅವತಾರ ಸ್ಥಳಂ: ಮಧುರಮಂಗಲಂ

ಆಚಾರ್ಯ: ಪೆರಿಯ ತಿರುಮಲೈ ನಂಬಿ

ಶಿಷ್ಯರು: ಪರಾಶರ ಭಟ್ಟರ್, ವೇದವ್ಯಾಸ ಭಟ್ಟರ್.

ಪರಮಪದ ಹೊಂದಿದ ಸ್ಥಳ: ತಿರುವರಂಗಂ

ಕೃತಿಗಳು:  ವಿಜ್ಞಾನ ಸ್ತುತಿ,  ಎಂಬೆರುಮಾನಾರ್ ವಡಿವಳಗು ಪಾಶುರಂ.

ಗೋವಿಂದ ಪೆರುಮಾಳ್ ಜನಿಸಿದ್ದು ಮಧುರಮಂಗಲದಲ್ಲಿ ಕಮಲನಯನ ಭಟ್ಟರ್ ಹಾಗು ಶ್ರೀದೇವಿ ಅಮ್ಮಾಳ್ ಅವರ ಪುತ್ರನಾಗಿ. ಅವರು ಗೋವಿಂದ ಭಟ್ಟರ್, ಗೋವಿಂದ ದಾಸರ್ ಮತ್ತು ರಾಮಾನುಜ ಪದಚ್ಛಾಯರ್ ಎಂದು ಸಹ ಕರೆಯಲ್ಪಡುತ್ತಾರೆ.  ಅವರು ಅಂತಿಮವಾಗಿ ಹಾಗು ಜನಪ್ರಿಯವಾಗಿ ಎಂಬಾರ್ ಎಂದು ಕರೆಯಲ್ಪಟ್ಟರು. ಇವರು ಎಂಬೆರುಮಾನಾರ್ ರ ಸೋದರಸಂಬಂಧಿಯಾಗಿದ್ದರು ಮತ್ತು ಯಾದವ ಪ್ರಕಾಶರ ಜೊತೆಯಲ್ಲಿನ ವಾರಣಾಸಿ ಯಾತ್ರೆಯಲ್ಲಿ ಎಂಬೆರುಮಾನಾರ್ ರು ಕೊಲೆಯಾಗುವುದನ್ನು ತಡೆದು ಸಾಧನೆ ಮಾಡಿದ್ದರು.

ಎಂಬೆರುಮಾನಾರ್ ರನ್ನು ಉಳಿಸಿದ ನಂತರ, ತಮ್ಮ ಯಾತ್ರೆಯನ್ನು ಮುಂದುವರೆಸಿದ ಗೋವಿಂದ ಪೆರುಮಾಳ್ ಓರ್ವ ಶಿವಭಕ್ತನಾಗಿ ಕಾಳಹಸ್ತಿಯಲ್ಲಿ ನೆಲೆಗೊಂಡರು. ಅವರನ್ನು ಸುಧಾರಣೆ ಮಾಡಲು ಎಂಬೆರುಮಾನಾರ್ ತಿರುಮಲೈ ನಂಬಿಗಳನ್ನು ಕಳುಹಿಸಿದರು. ಒಮ್ಮೆ ಗೋವಿಂದ ಪೆರುಮಾಳ್ ತಮ್ಮ ಪೂಜೆಗಾಗಿ ಹೂವುಗಳನ್ನು ಕೀಳಲು ನಂದವನಕ್ಕೆ ಬಂದಾಗ,  ಪೆರಿಯ ತಿರುಮಲೈ ನಂಬಿ ತಿರುವಾಯ್ ಮೊಳಿ ಪಾಶುರವಾದ “ದೇವನ್ ಎಂಬೆರುಮಾನುಕ್ಕಲ್ಲಾಲ್ ಪೂವುಂ ಪೂಸನೈಯುಂ ತಗುಮೇ” ಪಠಿಸಿದರು. ಅರ್ಥಾತ್ ಎಂಬೆರುಮಾನ್ ಶ್ರೀಮನ್ ನಾರಾಯಣ ಒಬ್ಬನೇ ಹೂಗಳಿಂದ ಪೂಜಿಸಲು ಅರ್ಹನಾಗಿದ್ದಾನೆ ಮತ್ತು ಬೇರೆ ಯಾರೂ ಅದಕ್ಕೆ ಅರ್ಹರಲ್ಲ ಎಂದು. ತಮ್ಮ ತಪ್ಪನ್ನು ಒಡನೆಯೇ ಅರಿತುಕೊಂಡ ಗೋವಿಂದಪ್ಪೆರುಮಾಳ್ ಶಿವನ ಬಗ್ಗೆ ತಮಗಿದ್ದ ಮೋಹವನ್ನು ತ್ಯಜಿಸಿ, ಪೆರಿಯತಿರುಮಲೈ ನಂಬಿಗಳಿಗೆ ಶರಣಾಗುತ್ತಾರೆ. ಅವರಿಗೆ ಪೆರಿಯ ತಿರುಮಲೈ ನಂಬಿಗಳು ಪಂಚಸಂಸ್ಕಾರವನ್ನು ನಿರ್ವಹಿಸುತ್ತಾರೆ ಮತ್ತು ಸಂಪ್ರದಾಯ ಅರ್ಥಗಳನ್ನು ಕಲಿಸಿಕೊಡುತ್ತಾರೆ.  ತದನಂತರ, ತಮ್ಮ ಆಚಾರ್ಯನ ಎಲ್ಲಾ ಕೈಂಕರ್ಯಗಳನ್ನೂ ಮಾಡುತ್ತಾ ಗೋವಿಂದಪೆರುಮಾಳ್ ಪೆರಿಯ ತಿರುಮಲೈನಂಬಿಗಳೊಡನೆ ವಾಸ ಮಾಡುತ್ತಾರೆ.

ಪೆರಿಯ ತಿರುಮಲೈ ನಂಬಿಗಳನ್ನು ಭೇಟಿಮಾಡಲು ತಿರುಪತಿಗೆ ಬಂದ ಎಂಬೆರುಮಾನಾರ್, ಅವರಿಂದ ಶ್ರೀರಾಮಾಯಣವನ್ನು ಕಲಿಯುತ್ತಾರೆ. ಆ ಸಮಯದಲ್ಲಿ ನಡೆದಂತಹ ಕೆಲವು ಘಟನೆಗಳು ನಮಗೆ ಎಂಬಾರ್ ರ ಹಿರಿಮೆಯನ್ನು ಅರ್ಥಮಾಡಿಸುತ್ತದೆ. ಅವುಗಳನ್ನು ಸಂಕ್ಷಿಪ್ತವಾಗಿ ನೋಡೋಣ:

  • ಒಮ್ಮೆ ಗೋವಿಂದ ಪೆರುಮಾಳ್, ಪೆರಿಯ ತಿರುಮಲೈ ನಂಬಿಗಳಿಗೆ ಹಾಸಿಗೆಯನ್ನು ತಯಾರುಗೊಳಿಸಿದ ನಂತರ, ತಮ್ಮ ಆಚಾರ್ಯ ಮಲಗುವ ಮುನ್ನ ತಾವು ಮಲಗುತ್ತಾರೆ. ಇದನ್ನು ನೋಡಿದ ಎಂಬೆರುಮಾನಾರ್ ಪೆರಿಯನಂಬಿಗಳಿಗೆ ಇದನ್ನು ತಿಳಿಸುತ್ತಾರೆ. ಈ ಘಟನೆಯ ಬಗ್ಗೆ ಪೆರಿಯನಂಬಿಗಳು ವಿಚಾರಿಸಿದಾಗ, ಗೋವಿಂದ ಪೆರುಮಾಳ್ ತಮಗೆ ನರಕ ಸಿಗುತ್ತದೆ ಎಂದು ತಿಳಿದಿದೆ ಆದರೆ ತಾವು ಅದನ್ನು ಲೆಕ್ಕಿಸುವುದಿಲ್ಲ ಎನ್ನುತ್ತಾರೆ.  ಹಾಸಿಗೆಯು ಆರಾಮದಾಯಕವಾಗಿದೆಯೆಂದು ಖಚಿತಪಡಿಸಿಕೊಳ್ಳಲು ಪರೀಕ್ಷಿಸಿದ್ದಾಗಿ ಅವರು ತಿಳಿಸುತ್ತಾರೆ. ಆ ಕಾರಣದಿಂದ ಅವರು ತಮ್ಮ ವಿಧಿಯ ಬಗೆಗಿನ ಚಿಂತೆಗಿಂತಲೂ ಹೆಚ್ಚು ಚಿಂತಿಸಿದ್ದು ತಮ್ಮ ಆಚಾರ್ಯರ ತಿರುಮೇನಿಯ ಬಗ್ಗೆ. ಇದರ ಸಂಬಂಧವು ಮಾಮುನಿಗಳ ಶ್ರೀಸೂಕ್ತಿಯಲ್ಲಿದೆ – ತೇಶಾರುಂ ಸಿಚ್ಚನ್ ಅವನ್ ಸೀರ್ ವಡಿವೈ ಆಸೈಯುಡನ್ ನೋಕ್ಕುಮವನ್ (தேசாரும் சிச்சன் அவன் சீர் வடிவை ஆசையுடன் நோக்குமவன்).
  • ಒಮ್ಮೆ ಗೋವಿಂದ ಪೆರುಮಾಳ್ ಹಾವಿನ ಬಾಯಿಯಲ್ಲಿ ಏನೋ ಮಾಡಿ ನಂತರ ಶರೀರ ಶುಧ್ಧಿಗಾಗಿ ಸ್ನಾನ ಮಾಡುವುದನ್ನು ಗಮನಿಸುತ್ತಾರೆ. ಯಾಕೆಂದು ಎಂಬೆರುಮಾನಾರ್ ವಿಚಾರಿಸಿದಾಗ, ಹಾವಿನ ಬಾಯಲ್ಲಿ ಒಂದು ಮುಳ್ಳು ಇದ್ದುದಾಗಿಯೂ ತಾವು ಅದನ್ನು ತೆಗೆದರೆಂದೂ ಗೋವಿಂದ ಪೆರುಮಾಳ್ ತಿಳಿಸುತ್ತಾರೆ. ಗೋವಿಂದಪೆರುಮಾಳ್ ರವರ ಜೀವ ಕಾರುಣ್ಯವನ್ನು ಕಂಡು ಎಂಬೆರುಮಾನಾರರಿಗೆ ಅಭಿಮಾನ ತುಂಬಿ ಬಂದಿತು.
  • ಎಂಬೆರುಮಾನಾರ್ ತಾವು ಹೊರಡುವುದಕ್ಕೆ ಪೆರಿಯ ತಿರುಮಲೈ ನಂಬಿಗಳಿಂದ ಅಪ್ಪಣೆ ಕೇಳಿದಾಗ, ನಂಬಿ ತಾವು ಎಂಬೆರುಮಾನಾರ್ ಅವರಿಗೆ ಏನನ್ನಾದರೂ ನೀಡಬೇಕೆಂದು ಬಯಸುತ್ತಾರೆ.  ಗೋವಿಂದ ಪೆರುಮಾಳ್ ರನ್ನು ಕಳುಹಿಸಬೇಕೆಂದು ಎಂಬೆರುಮಾನಾರ್ ನಂಬಿಯವರಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಇದನ್ನು ಸಂತೋಷದಿಂದ ಒಪ್ಪುವ ನಂಬಿಗಳು ಎಂಬೆರುಮಾನಾರ್ ರನ್ನು ತಮ್ಮಂತೆಯೇ ನಡೆಸಿಕೊಳ್ಳಬೇಕೆಂದು ಗೋವಿಂದ ಪೆರುಮಾಳ್ ರಿಗೆ ನಿರ್ದೇಶಿಸುತ್ತಾರೆ.  ಆದರೆ ಅವರು ಕಾಂಚೀಪುರಂ ತಲುಪುವಷ್ಟರಲ್ಲಿ, ತಮ್ಮ ಆಚಾರ್ಯರಿಂದ ಬೇರ್ಪಡಿಕೆಯನ್ನು ಸಹಿಸಲಾಗದೆ ತಮ್ಮ ಆಚಾರ್ಯರ ಬಳಿಗೆ ಹಿಂತಿರುಗುತ್ತಾರೆ. ಗೋವಿಂದ ಪೆರುಮಾಳ್ ತಮ್ಮ ಮನೆಯೊಳಗೆ ಬರುವುದನ್ನು ತಡೆಯುವ  ಪೆರಿಯ ತಿರುಮಲೈ ನಂಬಿಗಳು, ಒಮ್ಮೆ ಎಂಬೆರುಮಾನಾರ್ ರಿಗೆ ಕೊಟ್ಟ ನಂತರ ಅವರ ಬಳಿಯೇ ವಾಸಿಸಬೇಕೆಂದು ಹೇಳುತ್ತಾರೆ. ತಮ್ಮ ಆಚಾರ್ಯನ ಮನಸನ್ನು ಅರ್ಥಮಾಡಿಕೊಂಡ ಗೋವಿಂದ ಪೆರುಮಾಳ್ ಎಂಬೆರುಮಾನಾರ್ ರ ಬಳಿಗೆ ಹಿಂದಿರುಗುತ್ತಾರೆ.

ಶ್ರೀರಂಗಕ್ಕೆ ಹಿಂತಿರುಗಿದ ನಂತರ, ಗೋವಿಂದ ಪೆರುಮಾಳ್ ರವರ ತಾಯಿಯ ಕೋರಿಕೆಯ ಮೇರೆಗೆ ಎಂಬೆರುಮಾನಾರ್ ಗೋವಿಂದ ಪೆರುಮಾಳ್ ಅವರ ಮದುವೆಯನ್ನು ಆಯೋಜಿಸುತ್ತಾರೆ.  ಇಷ್ಟವಿಲ್ಲದೆ ಇದ್ದರೂ ಒಪ್ಪಿಕೊಂಡಿದ್ದ  ಗೋವಿಂದ ಪೆರುಮಾಳ್,  ತಮ್ಮ ಪತ್ನಿಯ ಜೊತೆಗೆ ದಾಂಪತ್ಯದಲ್ಲಿ ಎಂದಿಗೂ ತೊಡಗಿಸಿಕೊಳ್ಳುವುದಿಲ್ಲ.  ಗೋವಿಂದ ಪೆರುಮಾಳ್ ರನ್ನು ಏಕಾಂತದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಂಬೆರುಮಾನಾರ್ ನಿರ್ದಿಷ್ಟವಾಗಿ ಸೂಚನೆ ನೀಡಿದರೂ ಸಹ, ಹಿಂತಿರುಗಿ ಬಂದ ಗೋವಿಂದ ಪೆರುಮಾಳ್, ತಾವು ಎಲ್ಲೆಡೆಯೂ ಎಂಬೆರುಮಾನ್ ರನ್ನೇ ಕಾಣುವುದರಿಂದ ತನಗೆ ಏಕಾಂತದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾರೆ.   ಒಡನೆಯೇ ಗೊವಿಂದಪೆರುಮಾಳ್ ರ ಸನ್ನಿವೇಶವನ್ನು ಅರ್ಥಮಾಡಿಕೊಂಡ ಎಂಬೆರುಮಾನಾರ್, ಅವರಿಗೆ ಸಂನ್ಯಾಸಾಶ್ರಮವನ್ನು ನೀಡಿ, ಎಂಬಾರ್ ಎಮ್ಬ ಹೆಸರನ್ನೂ ನೀಡಿ, ಸದಾ ತಮ್ಮ ಜೊತೆಯಲ್ಲಿಯೇ ಇರಬೇಕೆಂದು ಆಜ್ಞಾಪಿಸುತ್ತಾರೆ.

ಒಮ್ಮೆ ಇತರ ಶ್ರೀವೈಷ್ಣವರುಗಳು ಎಂಬಾರ್ ರನ್ನು ಹೊಗಳಿದಾಗ ಎಂಬಾರ್ ಸಂತೋಷದಿಂದ ಆ ಹೊಗಳಿಕೆಗಳನ್ನು ಸ್ವೀಕರಿಸುತ್ತಾರೆ. ಇದನ್ನು ಗಮನಿಸಿದ ಎಂಬೆರುಮಾನಾರ್ ನೈಚ್ಚಿಯಾನುಸಂಧಾನಮ್  (ನಮ್ರತೆ) ಇಲ್ಲದೆ ಹೊಗಳಿಕೆಗಳನ್ನು ಸ್ವೀಕರಿಸುವುದು ಶ್ರೀವೈಷ್ಣವರ ಗುಣವಲ್ಲ ಎಂದು ಎಂಬಾರ್ ರಿಗೆ ತಿಳಿಸುತ್ತಾರೆ. ಅದಕ್ಕೆ ಎಂಬಾರ್ ನೀಡುವ ಉತ್ತರವೇನೆಂದರೆ, ಅತಿ ಕೆಳ ಮಟ್ಟದಲ್ಲಿದ್ದ ತಮ್ಮನ್ನು ಪರಿವರ್ತನೆ ಮಾಡಿದುದು ಎಂಬೆರುಮಾನಾರ್ ಆದುದರಿಂದ, ತಮ್ಮನ್ನು ಯಾರಾದರೂ ಹೊಗಳಿದರೆ, ಅದು ಎಂಬೆರುಮಾನಾರ್ ರನ್ನೇ ವೈಭವೀಕರಿಸಿದಂತಾಗುತ್ತದೆ ಎಂದು. ಅದನ್ನು ಅಂಗೀಕರಿಸುವ ಎಂಬೆರುಮಾನಾರ್, ಎಂಬಾರ್ ರ ಆಚಾರ್ಯ ಭಕ್ತಿಯನ್ನು ಶ್ಲಾಘಿಸುತ್ತಾರೆ.

ಒಮ್ಮೆ ಆಂಡಾಳ್ (ಕೂರತ್ತಾಳ್ವಾನ್ ರ ಪತ್ನಿ) ಎಂಬೆರುಮಾನ್ ರ ಪ್ರಸಾದದ ಮೂಲಕವಾದ  ಕೃಪೆಯಿಂದ ಎರಡು ಮಕ್ಕಳಿಗೆ ಜನ್ಮ ನೀಡಿದಾಗ, ಅವರ ನಾಮಕರಣ ಕಾರ್ಯಕ್ರಮಕ್ಕೆ ಭೇಟಿ ನೀಡಲು ಎಂಬಾರ್ ರೊಡನೆ ಎಂಬೆರುಮಾನಾರ್ ಆಗಮಿಸುತ್ತಾರೆ. ಆ ಮಕ್ಕಳನ್ನು ತರಲು ಎಂಬಾರ್ ರಿಗೆ ಎಂಬೆರುಮಾನಾರ್ ನಿರ್ದೇಶಿಸಿದಾಗ, ಹಾಗೆ ಮಾಡುವಾಗ ಎಂಬಾರ್ ಆ ಮಕ್ಕಳ ರಕ್ಷೆಗೆಂದು ದ್ವಯ ಮಂತ್ರವನ್ನು ಪಠಣೆ ಮಾಡುತ್ತಾರೆ. ಆ ಮಕ್ಕಳನ್ನು ನೋಡುತ್ತಿದ್ದ ಒಡನೆಯೇ ಎಂಬಾರ್ ರಿಂದ ದ್ವಯ ಮಂತ್ರೋಪದೇಶ ಆಗಿದೆಯೆಂಬುದನ್ನು ಎಂಬೆರುಮಾನಾರ್ ರಿಗೆ ಗುರುತಿಸಲು ಸಾಧ್ಯವಾಗುತ್ತದೆ ಮತ್ತು ಎಂಬಾರ್ ರಿಗೆ ಆ ಮಕ್ಕಳ ಆಚಾರ್ಯನಾಗಿರಬೇಕೆಂದು ಆಜ್ಞಾಪಿಸುತ್ತಾರೆ. ಈ ರೀತಿ ಪರಾಶರ ಭಟ್ಟರ್ ಮತ್ತು ವೇದವ್ಯಾಸ ಭಟ್ಟರ್, ಎಂಬಾರ್ ರ ಶಿಷ್ಯರಾಗುತಾರೆ.

ಲೋಕ ವಿಷಯಗಳಿಂದ (ಸಾಂಸಾರಿಕ ವಸ್ತುಗಳು) ಸಂಪೂರ್ಣ ವಿರಕ್ತರಾಗಿದ್ದ ಎಂಬಾರ್, ಭಗವದ್ ವಿಷಯದಲ್ಲಿ ಯಾವಾಗಲೂ ಆಸಕ್ತಿ ಹೊಂದಿದ್ದರು. ಭಗವದ್ ವಿಷಯದ ಮಹಾನ್ ರಸಿಕರಲ್ಲಿ (ಮೆಚ್ಚುವವ/ಆನಂದಿಸುವವ) ಅವರೂ ಒಬ್ಬರಾಗಿದ್ದರು. ವ್ಯಾಖ್ಯಾನಗಳಲ್ಲಿ ಬಹಳ ಕಡೆ ಎಂಬಾರ್ ರ ಭಗವದ್ ಅನುಭವಗಳ ಬಗೆಗಿನ ಹಲವಾರು ಘಟನೆಗಳು ಪ್ರಕಾಶಗೊಳಿಸಲಾಗಿದೆ. ಅಂತಹ ಕೆಲವನ್ನು ನಾವು ನೋಡೋಣ.

  • ಪೆರಿಯಾಳ್ವಾರ್ ತಿರುಮೊಳಿಯ ಕೊನೆಯ ಪಾಶುರ “ಛಾಯೈ ಪೋಲ ಪಾಡವಲ್ಲಾರ್ ತಾಮುಂ ಅಣುಕ್ಕರ್ಗಳೇ” ಎಂಬುವುದರ ಅರ್ಥವನ್ನು ಶ್ರೀವೈಷ್ಣವರು ಕೇಳಿದಾಗ ತಾವು ಎಂಬೆರುಮಾನಾರ್ ರಿಂದ ಆ ನಿರ್ದಿಷ್ಟ ಪಾಶುರದ ಅರ್ಥವನ್ನು ಕೇಳಿಲ್ಲವೆಂದು ಹೇಳುತ್ತಾರೆ. ಆದರೆ ಎಂಬೆರುಮಾನಾರ್ ರ ಪಾದುಕೆಯನ್ನು ತಮ್ಮ ತಲೆಯ ಮೇಲೆ ಇಟ್ಟು ಒಂದು ಕ್ಷಣ ಧ್ಯಾನ ಮಾಡಿ, ಎಂಬೆರುಮಾನಾರ್ ಆ ಕ್ಷಣದಲ್ಲಿ ಬಹಿರಂಗಪಡಿಸಿದ್ದುದು ಏನೆಂದರೆ “ಪಾಡವಲ್ಲಾರ್ – ಛಾಯೈ ಪೋಲ – ತಾಮುಂ ಅಣುಕ್ಕರ್ಗಳೇ ”  ಎಂದು ಅಂದರೆ, ಯಾರು ಈ ಪಾಶುರಗಳನ್ನು ಹಾಡುವರೋ, ಅವರು ನೆರಳಿನಂತೆ ಎಂಬೆರುಮಾನ್ ರಿಗೆ ಹತ್ತಿರವಾಗಿರುತ್ತಾರೆ ಎಂದು.
  • ಪೆರಿಯಾಳ್ವಾರ್ ತಿರುಮೊಳಿ 2.1 ದಶಕದಲ್ಲಿ ಯಾವರೀತಿ ಕಣ್ಣನ್ ಎಂಬೆರುಮಾನ್ ಎಲ್ಲರನ್ನೂ ಹೆದರಿಸುತ್ತಾನೆ ಎಂದು ಉಯ್ನಿಂದ ಪಿಳ್ಳೈ ಅರೈಯರ್ ಅಭಿನಯ ಮಾಡುವಾಗ,  ಕಣ್ಣನ್ ಎಂಬೆರುಮಾನ್ ತನ್ನ ಕಣ್ಣನ್ನು ಭಯ ಪಡಿಸುವಂತೆ ತೋರಿಸಿ ಗೋಪ ಕುಮಾರರನ್ನು (ಹಸುಮೇಯಿಸುವ ಹುಡುಗರು) ಹೆದರಿಸುವಂತೆ ತೋರಿಸುತ್ತಾರೆ.  ಆದರೆ ಹಿಂದಿನಿಂದ ನೋಡುತ್ತಿದ್ದ ಎಂಬಾರ್, ಕಣ್ಣನ್ ಎಂಬೆರುಮಾನ್ ತನ್ನ ಶಂಖ-ಚಕ್ರಗಳನ್ನು ತೋರಿಸಿ ಮಕ್ಕಳನ್ನು ಹೆದರಿಸಬಹುದೆಂದು ತೋರಿಸಿದಾಗ, ಅದನ್ನು ಅರ್ಥ ಮಾಡಿಕೊಂಡ ಅರೈಯರ್ ಸ್ವಾಮಿ, ಮುಂದಿನ ಸಲ ಅದನ್ನೇ ತೋರಿಸುತ್ತಾರೆ. ಇದನ್ನು ಗಮನಿಸಿದ ಎಂಬೆರುಮಾನಾರ್ “ಗೋವಿಂದ ಪೆರುಮಾಳೇ ಇರುಂದೀರೋ” (ನೀವು ಗೋಷ್ಟಿಯಲ್ಲಿ ಇದ್ದೀರೇನು?)  ಎಂದು ಕೇಳುತ್ತಾರೆ, ಏಕೆಂದರೆ ಎಂಬಾರ್ ಮಾತ್ರವೇ ಇಂತಹ ಸುಂದರವಾದ ಅರ್ಥಗಳನ್ನು ನೀಡಬಲ್ಲರು ಎಂದು ಅವರಿಗೆ ಗೊತ್ತಿತ್ತು.
  • ತಿರುವಾಯ್ಮೊಳಿಯ ಮಿನ್ನಿಡೈ ಮಡವಾರ್ಗಳ್ ದಶಕದಲ್ಲಿ (6.2), ಏನು ತೋರಿಸಲ್ಪಟ್ಟಿದೆಯೆಂದರೆ, ಆಳ್ವಾರ್ ತಮ್ಮ ತಿರುವುಳ್ಳಂನಲ್ಲಿ ಕಣ್ಣನ್ ಎಂಬೆರುಮಾನ್ ರೊಡನೆ ವಿಶ್ಲೇಷ ಹೊಂದಿದ್ದರು ಎಂಬುವುದು ಸಂನ್ಯಾಸಿಯಾಗಿದ್ದರೂ ಎಂಬಾರ್ ರಿಗೆ ಅರ್ಥವಾಗಿತ್ತು ಎಂದು.  ಅವರು ಈ ದಶಕಕ್ಕೆ ಅತ್ಯಂತ ಸುಂದರ ಅರ್ಥಗಳನ್ನು ನೀಡುತ್ತಿದ್ದದ್ದು ಎಲ್ಲಾ ಶ್ರೀವೈಷ್ಣವರುಗಳನ್ನೂ ಆಶ್ಚರ್ಯಚಕಿತರನ್ನಾಗಿಸಿತ್ತು. ಇದು ನೈಜವಾಗಿ ತೋರಿಸುವುದು ಹೇಗೆ ಓರ್ವ ಶ್ರೀವೈಷ್ಣವ “ಪರಮಾತ್ಮ ನಿರಕ್ತ: ಅಪರಮಾತ್ಮನಿ ವಿರಕ್ತ:” – ಎಂಬೆರುಮಾನ್ ನಿಗೆ ಸಂಬಂಧಿಸಿದ ಎಲ್ಲವೂ ಆನಂದಿಸಲು ಅರ್ಹವಾದವು ಮತ್ತು ಪರಮಾತ್ಮನಿಗೆ ಸಂಬಂಧಿಸಿಲ್ಲವಾದ ಯಾವುದನ್ನಾದರೂ ನಿಷೇಧಿಸಲ್ಪಡಬೇಕು/ತ್ಯಜಿಸಬೇಕು ಎಂದು..
  • ತಿರುವಾಯ್ಮೊಳಿಯ 10.8.3 ಪಾಶುರದ ವ್ಯಾಖ್ಯಾನದಲ್ಲಿ ಒಂದು ಅಸಕ್ತಿದಾಯಕ ಘಟನೆ ತೋರಿಸಲಾಗಿದೆ. ಎಂಬೆರುಮಾನಾರ್ ತಮ್ಮ ಮಠದ ಮುಂದೆ ನಡೆದಾಡುತ್ತಾ ತಿರುವಾಯ್ಮೊಳಿಯ ಮೇಲೆ ಧ್ಯಾನಿಸುತ್ತಿದ್ದವರು ಇದ್ದಕ್ಕಿದ್ದಂತೆ ಹಿಂತಿರುಗುತ್ತಾರೆ. ಬಾಗಿಲುಗಳ ಹಿಂದಿನಿಂದ ನೋಡುತ್ತಿದ್ದ ಎಂಬಾರ್, ಎಂಬೆರುಮಾನರನ್ನು “ಮಡಿತ್ತೇನ್” ಪಾಶುರದ ಬಗ್ಗೆ ಯೋಚಿಸುತ್ತಿದ್ದೀರೇನು ಎಂದು ಕೇಳುತ್ತಾರೆ ಮತ್ತು ಅದಕ್ಕೆ ಎಂಬೆರುಮಾನಾರ್ ಅಂಗೀಕಾರ ನೀಡುತ್ತಾರೆ. ಕೇವಲ ಒಂದು ಸರಳವಾದ ಕ್ರಿಯೆಯನ್ನು ಆಧರಿಸಿ ಎಂಬೆರುಮಾನಾರ್ ಏನನ್ನು ಯೋಚಿಸುತ್ತಿದ್ದಾರೆ ಎಂಬುವುದನ್ನು ನಿಖರವಾಗಿ ಗುರುತಿಸಲು ಎಂಬಾರ್ ರಿಗೆ ಸಾಧ್ಯವಾಯಿತು.

ತಮ್ಮ ಚರಮ ದಶೆಯಲ್ಲಿ ಎಂಬಾರ್ ಪರಾಶರ ಭಟ್ಟರಿಗೆ ನಮ್ಮ ಸಂಪ್ರದಾಯವನ್ನು ಶ್ರೀರಂಗದಿಂದ ನಿರ್ವಹಿಸುವಂತೆ ನಿಯಮಿಸುತ್ತಾರೆ. ಅವರು ಭಟ್ಟರಿಗೆ ಮತ್ತೂ ಹೇಳುವುದೇನೆಂದರೆ, ಭಟ್ಟರು ಯಾವಾಗಲೂ “ಎಂಬೆರುಮಾನಾರ್ ತಿರುವಡಿಗಳೇ ತಂಜಂ” ಎಂದು ಯೋಚಿಸಬೇಕು ಎಂದು. ಎಂಬೆರುಮಾನಾರ್ ರ ಮೇಲೆ ಧೀರ್ಘವಾಗಿ ಧ್ಯಾನಮಾಡುತ್ತಾ, ಎಂಬಾರ್ ತಮ್ಮ ಚರಮ ತಿರುಮೇನಿಯನ್ನು ತ್ಯಜಿಸಿ, ಎಂಬೆರುಮಾನಾರ್ ರೊಡನೆ ನಿತ್ಯವಿಭೂತಿಯಲ್ಲಿರಲು ಪರಮಪದವನ್ನು ತಲುಪುತ್ತಾರೆ.

ನಮ್ಮಗೂ  ಸಹ ಎಂಬೆರುಮಾನಾರ್ ಹಾಗು ನಮ್ಮ ಆಚಾರ್ಯರ ಬಗ್ಗೆ ಇದೇ ರೀತಿಯ ಸಂಬಂಧ ಬೆಳೆಯಲಿ ಎಂದು ಎಂಬಾರ್ ರ ಪದಕಮಲಗಳಲ್ಲಿ ಪ್ರಾರ್ಥಿಸೋಣ..

ಎಂಬಾರ್ ತನಿಯನ್

ರಾಮಾನುಜ ಪದಛ್ಚಾಯಾ ಗೋವಿಂದಾಹ್ವ ಅನಪಾಯಿನೀ
ತದಾ ಯತ್ತ ಸ್ವರೂಪಾ ಸಾ ಜೀಯಾನ್ ಮದ್ ವಿಶ್ರಮಸ್ಥಲೀ

ನಮ್ಮ ಮುಂದಿನ ಲೇಖನದಲ್ಲಿ, ನಾವು ಪರಾಶರ ಭಟ್ಟರ ವೈಭವವನ್ನು ನೋಡೋಣ.

ಅಡಿಯೇನ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://acharyas.koyil.org/index.php/2012/09/07/embar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org